У нас вы можете посмотреть бесплатно ಶ್ರೀ ವಾದಿರಾಜ ವಿರಚಿತ ಸುಂದರಕಾಂಡ...... Sundarakaanda...... или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ಶ್ರೀ ವಾದಿರಾಜ ವಿರಚಿತ ಸುಂದರಕಾಂಡ ಎಷ್ಟು ಸಾಹಸವಂತ ನೀನೇ ಬಲವಂತ | ದಿಟ್ಟ ಮೂರುತಿ ಭಳಿ ಭಳಿರೇ ಹನುಮಂತ || ಅಟ್ಟುವ ಖಳರೆ ದೆ ಮೆಟ್ಟಿ ತುಳಿದುತಲೆ | ಕುಟ್ಟಿ ಚಂಡಾಡಿದ ದಿಟ್ಟ ನೀನಹುದೋ ||ಪ|| ರಾಮರಪ್ಪಣೆಯಿಂದ ಶರಧಿಯ ದಾ೦ಟಿ | ಆ ಮಹಾ ಲಂಕೆಯ ಕಂಡೆ ಕಿರೀಟಿ | ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದಿ | ಈ ಮಹಿಯೊಳಗೆ ನಿನಗಾರೈ ಸಾಟಿ || ೧ || ದೂರದಿಂದಸುರನ ಪುರವನೆ ನೋಡಿ | ಭರದಿ ಶ್ರೀ ರಾಮರ ಸ್ಮರಣೆಯ ಮಾಡಿ | ಹಾರಿದೆ ಹರುಷದಿ ಹರಿಸಿ ಲಂಕಿಣಿಯನು | ವಾರಿಜ ಮುಖಿಯನು ಕಂಡು ಮಾತಾಡಿ || ೨ || ರಾಮರ ಕ್ಷೇಮವ ರಮಣಿಗೆ ಪೇಳಿ | ತಾಮಸ ಮಾಡದೆ ಮುದ್ರಿಕೆ ನೀಡಿ | ಪ್ರೇಮದಿ ಜಾನಕಿ ಕುರುಹನು ಕೊಡಲಾಗ | ಆ ಮಹಾವನದೊಳು ಫಲವನು ಬೇಡಿ|| ೩ || ಕಣ್ಣಿಗೆ ಪ್ರಿಯವಾದ ದ ಹಣ್ಣನು ಕೊಯ್ದು | ಹಣ್ಣಿನ ನೆವದಲಿ ಅಸುರರ ಹೊಯ್ದು | ಪಣ್ಣ ಪಣ್ಣನೆ ಹಾರಿ ನೆಗೆ ನೆಗೆದಾಡುತ | ಬಣ್ಣಿಸಿ ಅಸುರರ ಬಲವನು ಮುರಿದು || ೪ || ಶ್ರುಂಗಾರ ವನದೊಳಗೆ ಇದ್ದ ರಾಕ್ಷಸರ | ಅಂಗವನಳಿಸಿದೆ ಅತಿರಣಶೂರಾ | ನುಂಗಿ ಅಸ್ತ್ರಗಳ ಅಕ್ಷಯ ಕುವರನ | ಭಂಗಿಸಿ ಬಿಸುಟಿದ್ಯೋ ಬಂದ ರಕ್ಕಸರಾ|| ೫ || ದೂರು ಪೇಳಿದರೆಲ್ಲ ರಾವಣನೊಡನೆ | ಚೀರುತ್ತ ಕರೆಸಿದ ಇಂದ್ರಜಿತ್ತುವನೆ | ಚೋರ ಕಪಿಯನು ಹಿಡಿತಾಹುದೆನ್ನುತ | ಶೂರರ ಕಳುಹಿದ ನಿಜಸುತನೊಡನೆ || ೬ || ಪಿಡಿದನು ಇಂದ್ರಜಿತು ಕಡುಕೊಪದಿಂದ | ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ | ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ | ನಡೆದನು ಲಂಕೆಯ ಒಡೆಯನಿದ್ದೆಡೆಗೆ || ೭ || ಕಂಡನು ರಾವಣನು ಉದ್ದಂಡ ಕಪಿಯನು | ಮಂಡೆಯ ತೂಗುತ ಮಾತಾಡಿಸಿದನು | ಭಂಡು ಮಾಡದೆ ಬಿಡೆನೋಡು ಕಪಿಯನೆ | ಗಂಡುಗಲಿಯನು ದುರುದುರಿಸಿ ನೋಡಿದನು || ೮ || ಛಲವ್ಯಾಕೋ ನಿನಗಿಷ್ಟು ಎಲವೋಕೊಡಗನೆ | ನೆಲೆಯಾವುದ್ಹೇಳೋ ನಿನ್ನೂಡೆಯನೆಸರನ್ನೆ | ಬಲವಂತ ರಾಮರ ಬಂಟ ಬಂದಿಹೆನೋ | ಹಲವು ಮಾತ್ಯಾಕೋ ಹನುಮನು ನಾನೇ || ೯ || ಬಡ ರಾವಣನೆ ನಿನ್ನ ಬಡಿದು ಹಾಕುವೆನೋ | ಒಡೆಯನಪ್ಪನಣೆಯಿಲ್ಲ ಎಂದು ತಾಳಿದೆನೋ | ಪುಡಿಏಳಿಸುವೆನು ಪುಲ್ಲ ರಕ್ಕಸನೆ | ತೊಡೆವೆನೊ ನಿನ್ನ ಪಣೆಯ ಅಕ್ಷರವ || ೧೦ || ನಿನ್ನಂತ ದೂತರು ರಾಮರ ಬಳಿಯೊಳು | ಇನ್ನೆಷ್ಟು ಮಂದಿ ವುಂಟು ಹೇಳೋ ನೀ ತ್ವರಿಯಾ | ನನ್ನಂತ ದೂತರು ನಿನ್ನಂತ ಪ್ರೇತರು | ಇನ್ನೂರು ಮುನ್ನೂರು ಕೋಟಿ ಕೇಳರಿಯಾ || ೧೧ || ಕಡುಕೋಪದಿಂದಲಿ ಖೂಳ ರಾವಣನು | ಸುಡಿರೆಂದ ಬಾಲವ ಸುತ್ತಿ ವಸನವ | ಒಡೆಯನ ಮಾತಿಗೆ ತಡೆಬಡೆಯಿಲ್ಲದೆ | ಒಡನೆ ಮುತ್ತಿದ್ದರು ಗಡಿಮನೆಯವರು || ೧೨ || ತಂದರು ವಸನವ ತoಡ ತಂಡದಲಿ | ಒಂದೊಂದು ಮೂಟೆ ಎಂಭತ್ತು ಕೋಟಿಯಲಿ | ಛಂದದಿ ಹರಳಿನ ತೈಲದೊಳದ್ದಿಸಿ | ನಿಂದ ಹನುಮನು ಬಾಲವ ಬೆಳೆಸುತ || ೧೩ || ಶಾಲುಶಕಲಾತಿಯು ಸಾಲದೆಯಿರಲು | ಬಾಲೆರ ವಸ್ತ್ರವ ಸೆಳೆದು ತಾರೆನಲು | ಬಾಲವ ನಿಲ್ಲಿಸಿ ಬೆಂಕೆಯನಿಡುತಲಿ | ಕಾಲ ಮೃತ್ಯುವ ಕೆಣಕಿದರಲ್ಲಿ || ೧೪ || ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ | ಇಣುಕಿ ನೋಡುತ ಅಸುರರನಣಕಿಸುತ | ಝಣಝಣ ಝಣರೆನೆ ಬಾಲದ ಗಂಟೆಯು | ಮನದಿ ಶ್ರೀರಾಮರ ಪಾದವ ನೆನೆಯುತ || ೧೫ || ಮಂಗಳ೦ ಶ್ರೀರಮಚಂದ್ರ ಮೂರುತಿಗೆ | ಮಂಗಳಂ ಸೀತಾದೇವಿ ಚರಣoಗಳಿಗೆ | ಮಂಗಳವೆನುತ ಲಂಕೆಯ ಸುಟ್ಟು | ಲಂಘಿಸಿ ಅಸುರನ ಗಡ್ದಕೆ ಹಿಡಿದ || ೧೬ || ಹೊತ್ತಿತು ಅಸುರನ ಗಡ್ಡಮೀಸೆಗಳು | ಸುತ್ತಿತು ಹೊಗೆ ಬ್ರಹ್ಮಾಂಡ ಕೊಟಿಯೋಳು | ಚಿತ್ತದಿರಾಮರು ಕೋಪಿಸುವರು | ಎಂದು ಚಿತ್ರದಿ ನಡೆದನು ಅರಸನಿದ್ದೆಡೆಗೆ|| ೧೭ || ಸೀತೆಯ ಕ್ಷೇಮವ ರಾಮರಿಗೆ ಹೇಳಿ | ಪ್ರೀತಿಯಿಂಕೊಟ್ಟ ಕುರುಹ ಕರದಲ್ಲಿ | ಸೇತುವೆ ಕಟ್ಟಿ ಚದುರಂಗ ಬಲಸಹ | ಮುತ್ತಿತು ಲಂಕೆಯ ಸೂರೆಗೈಯುತಲಿ || ೧೮ || ಹೆಗ್ಗಳವಾಯಿತು ರಾಮರ ದಂಡು | ಮುತ್ತಿತು ಲಂಕೆಯ ಕೋಟೆಯ ಕಂಡು | ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ | ಝಗ್ಗನೆ ಪೇಳ್ವರು ರಾವಣಗಂದು || ೧೯ || ರಾವಣ ಮೊದಲಾದ ರಾಕ್ಷಸರ ಕೊಂದು | ಭಾವಶುದ್ಧದಲಿ ವಿಭೀಷಣಬಾಳೆಂದು | ದೇವಿ ಸೀತೆಯ ನೋಡಗೊಂಡು ಅಯೋಧ್ಯದಿ | ದೇವ ಶ್ರೀರಾಮರು ರಾಜ್ಯವಾಳಿದರು || ೨೦ || ಶಂಖದೈತ್ಯನ ಕೊಂದೆ ಶರಣು ಶರಣಯ್ಯ | ಶಂಖಗಿರಿಯಲಿ ನಿಂದ ಹನುಮಂತರಾಯ | ಪಂಕಜಾಕ್ಷ ಹಯವದನ ಕಟಾಕ್ಷದಿ | ಬಿಂಕದಿ ಪಡೆದೆಯೋ ಅಜನಪದವಿಯ || ೨೧ ||