У нас вы можете посмотреть бесплатно ಮುಗಳಖೋಡ- ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳಿಗೆ ಬಂಗಾರದ ಕೀರಿಟ ಧಾರಣೆ. или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ಮುಗಳಖೋಡ- ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳಿಗೆ ಬಂಗಾರದ ಕೀರಿಟ ಧಾರಣೆ. ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿರುವ ಶ್ರೀ ಯಲ್ಲಾಲಿಂಗ ಮಹಾರಾಜರ ಪುಣ್ಯಾಧಾರಣೆ ಕಾರ್ಯಕ್ರಮಕ್ಕೆ ಇಂದು ಧರ್ಮ ಸಭೆ ನಡೆಸುವ ಮೂಲಕ ತೇರೆ ಬಿದ್ದಿದೆ. ಪ್ರತಿ ದಿನ ಯಲ್ಲಾಲಿಂಗರ ಗದ್ದುಗೆಗೆ ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ, ರೊಟ್ಟಿ ಜಾತ್ರೆ, ಹಳ್ಳಿಯ ಸೊಗಡು, ಪ್ರವಚನ ಜರುಗಿದವು, ಕೊನೆಯ ದಿನವಾದ ಇಂದು ಜೇವರ್ಗಿ ಶಾಸಕ ಅಜೇಯಸಿಂಗ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳಿಗೆ ಬಂಗಾರದ ಕೀರಟ ಧಾರಣೆ ಮಾಡಿ ಪಾದ ಪೂಜೆ ಮಾಡಿದರು. ನಂತರ ಮುರಘರಾಜೇಂದ್ರ ಮಹಾಸ್ವಾಮಿಗಳು ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿ ನಾವೆಲ್ಲರೂ ನೆಮ್ಮದಿಯಿಂದ ,ಸಮೃದ್ದಿಯಿಂದ ಬದುಕಬೇಕಾದರೆ ಸನ್ಮಾರ್ಗದ ದಾರಿ ಹಿಡಿಯ ಬೇಕು , ನಮ್ಮ ಜೀವನದಲ್ಲಿ ಸತ್ಯೆ ವನ್ನೆ ನುಡಿಯಬೇಕು ಧರ್ಮದಿಂದ ನಡೆಯಬೇಕು ನಿಮ್ಮ ಪ್ರತಿ ಹೆಜ್ಜೆ ಸನ್ಮಾರ್ಗದತ್ತ ಇರಬೇಕು, ಮುಂಬರುವ ದಿನಗಳು ಸಂಘರ್ಷ ದಿಂದ ಕೂಡಿರುತ್ತವೆ, ಜಾತಿ ವ್ಯವಸ್ಥೆಯಿಂದ ನಡೆದರೆ ಭವಿಷ್ಯವಿಲ್ಲ ಧರ್ಮದಿಂದ ನಡೆದರೆ ಮಾತ್ರ ಒಳ್ಳೆಯ ಭವಿಷ್ಯವಿದೆ. ಗುರು ನಿಂದನೆ ಬೇಡ ಅದು ಪಾಪದ ಕೇಲಸ ಗುರು ಮತ್ತು ಅವರ ಶಕ್ತಿ ಯನ್ನು ಯಾರು ಪರಿಕ್ಷೆ ಮಾಡಬೇಡಿ ಎಂದು ಉಪದೇಶ ಮಾಡಿದರು ( ) ವೇದಿಕೆ ಮೇಲೆ ಜೇವರ್ಗಿ ಶಾಸಕ ಅಜೇಯ ಸಿಂಗ್, ಆಳಂದ ಶಾಸಕ ಸುಭಾಷ ಗುತ್ತೆದಾರ, ಕುಡಚಿ ಶಾಸಕ ಪಿ ರಾಜೀವ್, ಮಾಜಿ ಶಾಸಕ ವಿಶ್ವನಾಥ ಪಾಟೀಲ, ಪ್ರವಚನಕಾರರು, ಸಾಧು ಸಂತರು ಉಪಸ್ಥಿತರಿದ್ದರು. ಕಳೆದ 30 ವರ್ಷಗಳಿಂದ ಶ್ರೀ ಮಠದ ಭಕ್ತೆಯಾದ ಅನಸೂಯಾ ಮಾತನಾಡಿ ಕಳೆದ 10 ದಿನಗಳಿಂದ ಶ್ರೀ ಯಲ್ಲಾಲಿಂಗ ಮಹಾರಾಜರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತ ಜನ ಸಾಗರ ಸಾಗರದಂತೆ ಹರಿದು ಬರುತ್ತಿದೆ ಎಲ್ಲರಿಗೂ ಶ್ರೀ ಮುರಘರಾಜೇಂದ್ರ ಸ್ವಾಮಿಗಳ ಆದೇಶದಂತೆ ನಮ್ಮ ಮಹಿಳಾ ಮಂಡಳ ಕಾರ್ಯಕರ್ತೆಯರಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ,ಇಲ್ಲಿಗೆ ಬರುವ ಭಕ್ತರು ತಮ್ಮ ತವರು ಮನೆಗೆ ಬರುವ ರೀತಿಯಲ್ಲಿ ಬಂದು ಶ್ರೀ ಯಲ್ಲಾಲಿಂಗರ ಆಶಿರ್ವಾದ ಪಡರದುಕೊಂಡು ಪುನಿತರಾಗಿದ್ದಾರೆ ಎಂದರು ಈ ಧರ್ಮಸಭೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಆಂದ್ರ ಪ್ರದೇಶ, ತಮಿಳುನಾಡಿನಿಂದ ಸಾವಿರಾರು ಜನ ಭಕ್ತರು ಪಾಲ್ಗೊಂಡಿದ್ದರು.